FLASH NEWS

ಎಲ್ಲರಿಗೂ ಶುಭಾಶಯಗಳು

Children's Corner


ಕವಿ ಶ್ರೀ ಕಯ್ಯಾರರು                                     
ಶುಭ್ರ ಪುತ್ರಕಳ  VII ತರಗತಿ 


ಕನ್ನಡ ಭಾಷೆಯ  ಓ ಕವಿ ಮುತ್ತೆ
ಕನ್ನಡ ಸುಮಧುರ ಗೀತೆಯನಿತ್ತೆ
ಕನ್ನಡ ಮಾತೆಯ ಪೂಜಿಸುವವರು
ಗಡಿನಾಡ ವರ ಕವಿ ಕಯ್ಯಾರರು
ಆಂಗ್ಲಭಾಷೆಯು ಕನ್ನಡಕ್ಕೆ ಕುತ್ತು
ಇದರ ವಿರುದ್ಧ ಹೋರಾಟದ  ಆ ಗತ್ತು
ಕನ್ನಡ ಭಾಷೆಯ ಭಕ್ತನ ಗೈರತ್ತು
ತೋರಿದವರು ಕವಿ ಕಯ್ಯಾರರು
ಬೆಂಕಿ ಬಿದ್ದಿದೆ ಮನೆಗೆ ಎಂದು
ಕನ್ನಡಿಗರ ಬಡಿದೆಬ್ಬಿಸಿದ ಗೀತೆಯ ತುಂಬಾ
ಇಹುದು ಕನ್ನಡ ಹೋರಾಟದ ಪ್ರತಿಬಿಂಬ
ಎಂದರು  ವರ ಕವಿ ಕಯ್ಯಾರರು
ಬಹಳ ವಿಖ್ಯಾತ  ಆದವರಿವರು
ಶತಮಾನೋತ್ಸವ ಆಚರಿಸಿದರೂ
ಕನ್ನಡ ಗೀತೆಯ ಬರೆವೆನೆಂದರು
ಕನ್ನಡ ಭಾಷೆಯ ಭಕ್ತ  ಕಯ್ಯಾರರು
                 ಶುಭ್ರ ಪುತ್ರಕಳ
                  VII ತರಗತಿ  

        

      ಕುಟುಂಬ

ಗಾನ ಸಮೃದ್ಧಿ ಕೆ
   5 ನೇತರಗತಿ
ಅಮ್ಮ  ಅಮ್ಮ ನನ್ನಮ್ಮ 

ಮುದ್ದು ಮಾಡುವ ನನ್ನಮ್ಮ
ಅಪ್ಪ ಅ ಪ್ಪ ನನ್ನಪ್ಪ
ಕತೆಗಳ ಹೇಳುವ ನನ್ನಪ್ಪ
ಅಣ್ಣ ಅಣ್ಣ ನನ್ನಣ್ಣ
ಕೀಟಲೆ ಮಾಡುವ ನನ್ನಣ್ಣ
ಅಪ್ಪ ಅಮ್ಮ ಅಣ್ಣ
ಇವರ ಜೊತೆಯಲಿ ಇರುವೆನು ನಾನು
ಖುಷಿ ಖುಷಿಯಲಿ ನಲಿವೆನು ನಾನು
                

              



No comments:

Post a Comment