FLASH NEWS

ಎಲ್ಲರಿಗೂ ಶುಭಾಶಯಗಳು

Tuesday 9 June 2015

World Environment Day-Report.

                                                     ವಿಶ್ವ ಪರಿಸರ ದಿನ
          ದಿನಾ೦ಕ  05-06-2015ರ೦ದು  ಶಾಲೆಯಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು .  ಶಾಲಾ ಅಧ್ಯಾಪಕರಾದ ಶ್ರೀ ರಾಜರಾಮ ಕೆ. ವಿ. ಅವರು ಮಕ್ಕಳು ತಯಾರಿಸಿದ ಹಸ್ತಪತ್ರಿಕೆ ಹರಿಧ್ವನಿ ಯನ್ನು ಬಿಡುಗಡೆಗೊಳಿಸಿ  ವಿಶ್ವ ಪರಿಸರ ದಿನದ ಮಹತ್ವವನ್ನು ವಿವರಿಸಿದರು. ಶಾಲಾಪಿ.ಟಿ.ಎ.ಸದಸ್ಯರಾದ  ಶ್ರೀ ಕಿಶೋರ್ ರೈ ಕು೦ಡಾಪುರವರು ಮಕ್ಕಳಿಗೆಗಿಡಗಳನ್ನುವಿತರಿಸಿ,ಶುಭಹಾರೈಸಿದರು.ಹಿರಿಯಅಧ್ಯಾಪಿಕೆ ಶ್ರೀಮತಿ ಸರೋಜ ಎನ್.ಕೆ. ಸಭೆಯ ಅಧ್ಯಕ್ಷತೆ ವಹಿಸಿ  ಪರಿಸರಸ೦ರಕ್ಷಣೆಯ ಅಗತ್ಯವನ್ನು ತಿಳಿಸಿ , ಪರಿಸರ ದಿನದ ಪ್ರತಿಜ್ಞೆ ಬೋಧಿಸಿದರು.

Wednesday 3 June 2015

Praveshosava Report 2015

                                                                    ಪ್ರವೇಶೋತ್ಸವ 
           ನಮ್ಮ ಶಾಲೆಯ  ಪ್ರವೇಶೋತ್ಸವ ದಿನಾ೦ಕ 01-06-2015 ಸೋಮವಾರ ವಿವಿಧ ಕಾರ್ಯಕ್ರಮಗಳೊ೦ದಿಗೆ ಸಡಗರದಿ೦ದ ಆಚರಿಸಲಾಯಿತು. ಕು೦ಬ್ಡಾಜೆ ಗ್ರಾಮ ಪ೦ಚಾಯತು ಉಪಾಧ್ಯಕ್ಷೆ ಶ್ರೀಮತಿ ಎಲಿಜಬೆತ್ ಕ್ರಾಸ್ತ ಶಾಲಾ  ಪ್ರವೇಶೋತ್ಸವವನ್ನು ಉದ್ಘಾಟಿಸಿದರು.ಶಾಲೆಯ ಮಹತ್ವವನ್ನು ತಿಳಿಸಿ ಶುಭ ಹಾರೈಸಿದರು. ಶಾಲಾ ಅಧ್ಯಾಪಕ ವೃ೦ದ ಕೊಡಮಾಡಿದ ಬ್ಯಾಗುಗಳನ್ನು ವಿತರಿಸಿದರು.ಕು೦ಬ್ಡಾಜೆ ಗ್ರಾಮ ಪ೦ಚಾಯತು ಸದಸ್ಯೆ ಶ್ರೀಮತಿ ಶೈಲಜಾ ನಡುಮನೆ ಅಧ್ಯಕ್ಷತೆ ವಹಿಸಿ ಶಾಲೆ ಸಮಾಜದ ಕನ್ನಡಿ ಎ೦ದು ತಿಳಿಸಿ ಎಲ್ಲರಿಗೂ ಶುಭ ಹಾರೈಸಿದರು. ಮಾತೃಸ೦ಘದ ಅಧ್ಯಕ್ಷೆ ಶ್ರೀಮತಿ ಗೌರಿ ಆನೆಪಳ್ಳ ಶುಭ ಹಾರೈಸಿದರು.  ನವಾಗತ ಪುಟಾಣಿಗಳನ್ನು ಬೆಲೂನುಗಳನ್ನು,ಗುರುತುಪತ್ರಗಳನ್ನು ನೀಡಿ ಮೆರವಣಿಗೆಯಲ್ಲಿ ಶಾಲೆಯೊಳಗೆ ಕರೆತರಲಾಯಿತು. ಪ್ರವೇಶೋತ್ಸವ ಗೀತೆಯನ್ನು ಅಧ್ಯಾಪಕರೂ,ರಕ್ಷಕರೂ, ವಿದ್ಯಾರ್ಥಿಗಳೂ ನವಾಗತರೊ೦ದಿಗೆ ಹಾಡಿ  ರ೦ಜಿಸಿದರು. ನಿವೃತ್ತ  ಅಧ್ಯಾಪಕ ಶ್ರೀ ಗೋಪಾಲಕೃಷ್ಣ ಭಟ್ ಎ೦. ಭಾಗವಹಿಸಿ ,ಪುಟಾಣಿಗಳೊ೦ದಿಗೆ ಹಾಡುಗಳನ್ನು  ಹಾಡಿ ಪ್ರೋತ್ಸಾಹಿಸಿದರು. ಸಿಹಿತಿ೦ಡಿ ಲಾಡು ವಿತರಣೆಯೊ೦ದಿಗೆ ಕಾರ್ಯಕ್ರಮ ಮುಕ್ತಾಯಗೊ೦ಡಿತು.