ವಾಚನ
ವಾರಾಚರಣೆ
ವ್ಯಾಸ ಭಾರತ ಕರ್ನಾಟಕ ಕಥಾಮಂಜರಿಯಿಂದ ಆಯ್ದ ಸುಭದ್ರಾ ಕಲ್ಯಾಣ ಎಂಬ ಕಥಾನಕವನ್ನು ಕಾವ್ಯವಾಚನದ
ರೀತಿಯಲ್ಲಿ ವಾಚಿಸಲಾಯಿತು.
ಅಧ್ಯಾಪಕರಾದ ಶ್ರೀ ಮಧುಶ್ಯಾಮ ಇವರು ವಾಚಿಸಿ ಶ್ರೀ ರಾಜಾರಾಮ ಕೆ.ವಿ.
ಇವರು ಪ್ರವಚನಗೈದರು.
ನಂತರ ಏಳನೇ ತರಗತಿಯ ಮಕ್ಕಳು ಕಥಾಭಾಗದಿಂದ ಆಯ್ದ ಕೆಲವು ಪ್ರಶ್ನೆಗಳನ್ನು
ಕೇಳಿದರು.
ಹೆಚ್ಚಿನ ಮಕ್ಕಳು ಸಮರ್ಪಕವಾದ ಉತ್ತರವನ್ನು
ನೀಡಿದರು.
ಮಕ್ಕಳುಅಧ್ಯಾಪಕರ ಜೊತೆಗೆ ಕುಳಿತು ಕೆಲವು ಗ್ರಂಥಾಲಯದ ಪುಸ್ತಕಗಳನ್ನು ಓದಿ ತಮ್ಮ ಜ್ಞಾನವನ್ನು ವೃಧ್ದಿಸಿದರು.
ಮಕ್ಕಳುಅಧ್ಯಾಪಕರ ಜೊತೆಗೆ ಏತಡ್ಕದ ಸಾರ್ವಜನಿಕ ಗ್ರಂಥಾಲಯಕ್ಕೆ ಭೇಟಿ ನೀಡಿದರು. ಗ್ರಂಥಾಲಯದ ಅಧ್ಯಕ್ಷರಾದ ಕಳೆಯತ್ತೋಡಿ ಶ್ಯಾಮ್ ಭಟ್ ರವರ ಜೊತೆಗೆ ಮಕ್ಕಳು ಸಂವಾದವನ್ನು ನಡೆಸಿದರು.ಅವರು ಮಕ್ಕಳ ಪ್ರಶ್ನೆಗಳಿಗೆ ಸಮರ್ಪಕವಾಗಿಉತ್ತರಿಸಿದರು.
No comments:
Post a Comment