FLASH NEWS

ಎಲ್ಲರಿಗೂ ಶುಭಾಶಯಗಳು

Saturday 10 June 2017

Vidyarangam & Poet Kayyars Birthday Celebration






ವಿದ್ಯಾರ೦ಗ ಕಲಾಸಾಹಿತ್ಯ ವೇದಿಕೆ
  ವಿದ್ಯಾರ೦ಗ ಕಲಾಸಾಹಿತ್ಯ ವೇದಿಕೆ ಉದ್ಘಾಟನೆ ಮತ್ತು ಕವಿ ಕಯ್ಯಾರ ಕಿ೦ಞಣ್ಣ ರೈಗಳ ಜನ್ಮ ದಿನಾಚರಣೆಯನ್ನು ಜೂನ್ 8ರ೦ದು ಶಾಲೆಯಲ್ಲಿ ಆಚರಿಸಲಾಯಿತು ಅಧ್ಯಾಪಿಕೆ ಶ್ರೀಮತಿ ಸರೋಜ  ಎನ್ ಕೆ ಮಕ್ಕಳು ರಚಿಸಿದ ಭಿತ್ತಿಪತ್ರಿಕೆ ಸೃಜನಧಾರವನ್ನು ಬಿಡುಗಡೆಗೊಳಿಸಿ ವಿದ್ಯಾರ೦ಗ ಕಲಾಸಾಹಿತ್ಯ ವೇದಿಕೆಯನ್ನು ಉದ್ಘಾಟಿಸಿದರು. ಶಾಲಾ ಅಧ್ಯಾಪಕರಾದ ಶ್ರೀ ರಾಜರಾಮ ಕೆ. ವಿ. ಅವರು ಶತಮಾನದ ಕವಿ ಕಯ್ಯಾರರ ಬದುಕು ಬರಹಗಳ ಬಗ್ಗೆ ಮಾತನಾಡಿದರು. ಮಕ್ಕಳು, ಕಯ್ಯಾರರು ರಚಿಸಿದ ಹಾಡುಗಳನ್ನು ಹಾಡಿ ಮಹಾನ್ ಚೇತನವನ್ನು ಸ್ಮರಿಸಿದರು.ಅಧ್ಯಾಪಿಕೆ ಶ್ರೀಮತಿ ಸುಶೀಲ ವಿ ಪ್ರಾಸ್ತಾವಿಕ ಮಾತುಗಳನ್ನಾಡಿ ವಿದ್ಯಾರ೦ಗ ಕಲಾಸಾಹಿತ್ಯ ವೇದಿಕೆಯ ಚಟುವಟಿಕೆಗಳ ಸ್ಥೂಲ ಪರಿಚಯ ನೀಡಿದರು. ವಿದ್ಯಾರ್ಥಿಗಳಾದ ರಮ್ಯ. ಕೆ ಸ್ವಾಗತಿಸಿ, ಪ್ರಣವ್ ಬಿ ರೈ ವಂದಿಸಿದರು ಅರ್ಪಿತ ಕೆ ಕಾರ್ಯಕ್ರಮ ನಿರೂಪಿಸಿದಳು



No comments:

Post a Comment