FLASH NEWS

ಎಲ್ಲರಿಗೂ ಶುಭಾಶಯಗಳು

Tuesday 15 August 2017

INDEPENDENCE DAY




ಸ್ವಾತ೦ತ್ರ್ಯ ದಿನಾಚರಣೆ



          ಅಗೋಸ್ತು 15ರ೦ದು ಶಾಲೆಯಲ್ಲಿ ವಿವಿಧ ಕಾರ್ಯಕ್ರಮಗಳೊ೦ದಿಗೆ  ಸ್ವಾತ೦ತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಬೆಳಗ್ಗೆ 9.30ಕ್ಕೆ  ಕು೦ಬ್ಡಾಜೆ ಗ್ರಾಮ ಪ೦ಚಾಯತ್ ಸದಸ್ಯೆ  ಶ್ರೀಮತಿ ಶೈಲಜಾ ನಡುಮನೆ ರಾಷ್ಟ್ರಧ್ವಜ ಏರಿಸುವುದರೊ೦ದಿಗೆ ಕಾರ್ಯಕ್ರಮ ಆರ೦ಭಗೊ೦ಡಿತು. ನ೦ತರ ಏತಡ್ಕದ ಬೀದಿಗಳಲ್ಲಿ  ಸ್ವಾತ೦ತ್ರ್ಯ ದಿನ ಮೆರವಣಿಗೆ ನಡೆಯಿತು.ಮಕ್ಕಳು ಸ್ವಾತ೦ತ್ರ್ಯ  ಹೋರಾಟಗಾರರ ವೇಷ ಧರಿಸಿ ಮೆರವಣಿಗೆಗೆ ಮೆರುಗು ನೀಡಿದರು.  ನ೦ತರ ನಡೆದ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿ.ಟಿ.ಎ.ಅಧ್ಯಕ್ಷರಾದ ಶ್ರೀ ಸಂತೋಷ್ ಕುಮಾರ್ ರೈ ಪುತ್ರಕಳ ವಹಿಸಿ, ಸ್ವಾತ೦ತ್ರ್ಯ ದಿನದ ಮಹತ್ವವನ್ನು ತಿಳಿಸಿದರು. ಮಕ್ಕಳು ರಚಿಸಿದ ಹಸ್ತಪತ್ರಿಕೆ "ಸ್ವತಂತ್ರ ವಾಣಿ"ಯನ್ನು ಕು೦ಬ್ಡಾಜೆ ಗ್ರಾಮ ಪ೦ಚಾಯತ್ ಸದಸ್ಯೆ  ಶ್ರೀಮತಿ ಎಲಿಜಬೆತ್ ಕ್ರಾಸ್ತ ಬಿಡುಗಡೆಗೊಳಿಸಿದರು.ಶಾಲಾ ಮೆನೇಜರ್ ಶ್ರೀ ವೈ. ಶ್ರೀಧರ್ ಭಾಗವಹಿಸಿ  ಶುಭ ಹಾರೈಸಿದರು. ಎ೦.ಪಿ.ಟಿ.ಎ.ಅಧ್ಯಕ್ಷೆ  ಶ್ರೀಮತಿ  ಸೌಮ್ಯ ನೆಲ್ಲಿಮೂಲೆ  ಸ್ವಾತ೦ತ್ರ್ಯ  ಹೋರಾಟದ ಬಗ್ಗೆ  ಮಾತನಾಡಿ, ದೇಶಪ್ರೇಮ ಬೆಳೆಸಿಕೊಳ್ಳುವಂತೆ ಕರೆನೀಡಿದರು.ಕು೦ಬ್ಡಾಜೆ ಗ್ರಾಮ ಸೇವಾಸಂಘ ಗ್ರಂಥಾಲಯ ಏತಡ್ಕ, ಇದರ ಅಧ್ಯಕ್ಷರಾದ  ಶ್ರೀ ಶ್ಯಾಮ ಭಟ್ಟ ಕಳೆಯತ್ತೋಡಿ ಭಾಗವಹಿಸಿ ಶುಭ ಹಾರೈಸಿ ಸ್ವಾತ೦ತ್ರ್ಯ  ಸಿಕ್ಕಿದ ಸಂದರ್ಭದ ನೆನಪುಗಳನ್ನು ತಿಳಿಸಿದರು.ಶಾಲಾ ಎಸ್. ಎಸ್. ಜಿ . ಅಧ್ಯಕ್ಷರಾದ ಶ್ರೀ ಗಂಗಾಧರ ಮೂಲ್ಯ ಭಾಗವಹಿಸಿ  ಶುಭ ಹಾರೈಸಿದರು. ಮಕ್ಕಳಿ೦ದ ದೇಶಭಕ್ತಿ ಗೀತೆಗಳ ಗಾಯನ, ಭಾಷಣ ಮು೦ತಾದ  ಕಾರ್ಯಕ್ರಮಗಳು ನಡೆಯಿತು.  ಸ್ವಾತ೦ತ್ಯ್ರ ರಸಪ್ರಶ್ನೆ ಸ್ಪರ್ಧೆ, ರಾಷ್ಟ್ರಧ್ವಜದ ಚಿತ್ರರಚನೆ ಸ್ಪರ್ಧೆ, ಭಾಷಣ ಸ್ಪರ್ಧೆ,ಛದ್ಮವೇಷ ಸ್ಪರ್ಧೆವಿಜೇತರಿಗೆ ಬಹುಮಾನ ವಿತರಿಸಲಾಯಿತು.ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸರೋಜ .ಪಿ. ಸ್ವಾಗತಿಸಿ, ಅಧ್ಯಾಪಕರಾದ ಶ್ರೀ ರಾಜಾರಾಮ ಕೆ.ವಿ.  ವಂದಿಸಿದರು.ವಿದ್ಯಾರ್ಥಿನಿಗಳಾದ ಅರ್ಪಿತಾಹಾಗು ರಮ್ಯ ಕಾರ್ಯಕ್ರಮ ನಿರೂಪಿಸಿದರು.ಸಿಹಿತಿ೦ಡಿ ಚೋಕಲೇಟ್ ಹಂಚಲಾಯಿತು. ಪಾಯಸ ಕುಡಿದು ಸಂತಸಪಟ್ಟರು. ಅಧ್ಯಾಪಕರೂ,ರಕ್ಷಕರೂ ಮತ್ತು ಮಕ್ಕಳು ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು



No comments:

Post a Comment